Friday, June 6, 2014

ದೇಹಾಂತ - ಒಂದು ಸಣ್ಣಕತೆ

ದೇಹಾಂತ


(’ದೇಹಾಂತ’೧೯೯೯ರಲ್ಲಿ ಪ್ರಿಸಂ ಬುಕ್ಸ್ ಗಾಗಿ  ಡಾ. ಜಿ.ಏಸ್. ಆಮೂರರು ಸಂಪಾದಿಸಿದ  ’ಈ ಶತಮಾನದ ಮಹಿಳೆಯರ ಆಯ್ದ ಇಪ್ಪತ್ತೈದು ಕತೆಗಳ ಸಂಕಲನ ’ಅವಳ ಕತೆಗಳು’ ನಲ್ಲಿ  ಸೇರಿದೆ.)

ರಾಜೀವನಿಗೆ ಆದ ತಳಮಳ ಶ್ರೀಪಾದು ಮಾಮನ ಸಾವಿನ ಸುದ್ದಿ ಕೇಳಿದ ತಕ್ಷಣ ಆದ ದುಃಖದಿಂದಲ್ಲ. ಆಗದ ದುಃಖದಿಂದ. ಹಾಗೆ ನೋಡಿದರೆ, ಶ್ರೀಪಾದು ಮಾಮ ಹೋದ ಸುದ್ದಿ ಕೇಳಿದ ತಕ್ಷಣ ತನಗೆ ಆಘಾತ ಆಗಬೇಕೆಂದು ರಾಜೀವ ಮನಸ್ಸಿನಲ್ಲಿ ನಿರೀಕ್ಷೆ ಮಾಡದೆ ಹೋಗಿದ್ದರೆ, ಈ ಪ್ರತಿಕ್ರಿಯೆಯ ಬಗ್ಗೆ ಅವನಿಗೆ ಅಪರಾಧಿ ಪ್ರಜ್ಞೆ, ಆಶ್ಚರ್ಯ, ತಳಮಳ ಇತ್ಯಾದಿ ಭಾವನೆಗಳು ನುಗ್ಗಿ ಬರಬೇಕಾಗೇ ಇರಲಿಲ್ಲ.
ಆಫೀಸಿನಿಂದ ಬಂದು ಶೂ ಬಿಚ್ಚುತ್ತಿರುವಾಗಲೇ, ರಮಾ ಕೈಲಿಟ್ಟ ಕಾಗದ, ಅವಳ ಪೆಚ್ಚು ಮುಖ ನೋಡಿ ಏನೋ ಕೆಟ್ಟ ಸುದ್ದಿ ಕಾದಿರಬೇಕೆಂದು ಅವನಿಗೆ ತಿಳಿದು ಬಂದಿತ್ತು. ಛಿ ॒ಆರಾಮವಾಗಿ ಕಾಫಿ ಕುಡಿದು, ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಆಂದ್ರೆ ಇನ್ನೇನು ಕಾದಿದೆಯೋ! ಅಕ್ಷರಗಳ ಮೇಲೆ ಕಣ್ಣೋಡಿಸಿ ತಲೆ ಎತ್ತಿದಾಗ ಅವನ ಅಸಹನೆಯ ಮುಖ ನೋಡಲು ಅದೃಷ್ಟವಶಾತ್ ರಮಾ ಎದುರಿಗಿರಲಿಲ್ಲ. ಕಾಗದ ಕಿವುಚಿ ನೆಲದ ಮೇಲೆಸೆದು ಉಸ್ಸೆಂದು ಗೋಡೆಗೆ ತಲೆಯಾನಿಸಿ ಹಿಂದೊರಗಿದ.
ರಮಾ ಕಾಫಿಯೊಂದಿಗೆ ಬಂದವಳು “ಆಗ್ಲೇ ಹತ್ತು ದಿನ ಆಗ್ಹೋಗಿದೆ ॒ಪಾಪ ॒ಅನ್ಯಾಯ ॒ಅಂಥಾ ಕಾಯಿಲೇನೂ ಆಗಿರಲಿಲ್ಲ’॒’ ಎಂದಳು.
“ಹೆಂಡತಿ ಮಕ್ಕಳುಮರಿ ಕೂಡ ಇರಲಿಲ್ಲ ॒ಆರಾಮವಾಗಿದ್ದ ॒ದೇವರು ಆಯಸ್ಸು ಕೊಡಲಿಲ್ಲ’॒’ ಎಂದಳು.
“ಏನು ಮಹಾ ವಯಸ್ಸು ॒ಹಾಯಾಗಿ ತಿಂದು ತಿರುಗಿ ಓಡಾಡಿಕೊಂಡಿರೋ ಕಾಲಕ್ಕೆ ಕಣ್ಮುಚ್ಚಿಕೊಂಡ’॒’ ಎಂದಳು.
“ಪ್ರತಿಸಲ ಯಾರು ಬೊಂಬಾಯಿಂದ ಆ ಕಡೆ ಹೋದರೂ ॒ರಾಜೀವ ಅವನ ಹೆಂಡತಿ ಮಕ್ಕಳನ್ನು ನೋಡಿ ಎಷ್ಟು ವರ್ಷಗಳಾಗ್ಹೋಯ್ತು ಎಂದು ಹಲಬ್ತಾನೇ ಇದ್ದ’॒’ ಎಂದಳು.
ರಾಜೀವನ ಕೈಗೆ ಲೋಟ ಬರುವ ಹೊತ್ತಿಗೆ, ಕಾಫಿ ಸ್ವಲ್ಪ ಆರಿತ್ತು. ಒಂದು ಗುಟುಕು ಹೀರಿದವನೇ “ಥತ್, ಎಷ್ಟು ಸಲ ನಿಂಗೆ ಹೇಳಬೇಕು ॒ನಿಂಗೊತ್ತಿಲ್ವೆ ॒ನಂಗೆ ಕಾಫಿ ಬಿಸಿಬಿಸಿ ಇರಬೇಕೂಂತ’॒’ ಎಂದು ಗದರಿದ.
ರಮಾ ಮಾತಿಲ್ಲದೆ ಅವನ ಕೈಯ್ಯಿಂದ ಕಾಫಿ ಲೋಟ ತೆಗೆದುಕೊಂಡು ಮತ್ತೆ ಬಿಸಿ ಮಾಡಿ ತರಲು ಅಡಿಗೆ ಮನೆಗೆ ನಡೆದಳು. ಹೂ ॒ಅಂದುಕೊಳ್ಳುತ್ತಿರಬೇಕು ॒ಸೋದರಮಾವ ಹೋದ ಸುದ್ದಿ ಕೇಳಿ ನಿಮಿಷಗಳೂ ಆಗಿಲ್ಲ. ಆಗಲೇ ಕಾಫಿ ಬಿಸಿ ತಣ್ಣಗಿನ ಬಗ್ಗೆ ಕಿರಿಕಿರಿ ॒ಎಂಥಾ ಕಲ್ಲು ಹೃದಯಾಂತ, ನಿಜವೇ॒
ಶ್ರೀಪಾದು ಮಾಮ ತಾನು ತುಂಬಾ ಚಿಕ್ಕವನಾಗಿದ್ದಾಗಿನಿಂದ ತನ್ನ ಅಚ್ಚುಮೆಚ್ಚಿನ ಮಾಮ. ಪ್ರತಿ ಭಾನುವಾರ ಮೈಸೂರಿಗೆ ಬರುವಾಗ ತನ್ನ ಪ್ರೀತಿಯ ಸೋಹನ್ ಪಾಪಡಿ, ಚಕ್ಕುಲಿ, ಬೆಣ್ಣೆ ಬಿಸ್ಕತ್ತಿನ ಪೊಟ್ಟಣ ಕೈಲಿ ಹಿಡಿದೇ ಬರುತ್ತಿದ್ದ. “ಶ್ರೀಪಾದು ಮಾಮ ಬಂದ ॒ಶ್ರೀಪಾದು ಮಾಮ ಬಂದ’॒’ ತಾನು ಜಮುನಾ ಗೇಟಿನಲ್ಲಿ ಅವನನ್ನು ಕಂಡ ತಕ್ಷಣ ಅಡಿಗೆ ಮನೆಯಲ್ಲಿರುತ್ತಿದ್ದ ಅಮ್ಮನಿಗೆ ಸುದ್ದಿ ಮುಟ್ಟಿಸುತ್ತಿದ್ದೆವು. ಭಾನುವಾರಗಳು ಬರುವುದೇ ಶ್ರೀಪಾದು ಮಾಮನಿಗೋಸ್ಕರ ಎಂದು ತಮಗೆ ಖಾತರಿಯಾಗಿತ್ತು.
ತಾನು ದೊಡ್ಡವನಾದಂತೆ ತನ್ನೆಲ್ಲಾ ಮಾಮಂದಿರಗೂ ಮದುವೆಯಾಗಿ ಮಾಮಿಯರು ಬಂದಿದ್ದರು. ಆದರೆ ಶ್ರೀಪಾದು ಮಾಮನಿಗೆ ಮದುವೆಯೇ ಆಗಿರಲಿಲ್ಲ. ಒಂದು ರೀತಿಯಲ್ಲಿ ಆಗ ತನಗೆ ಖುಷಿಯಾಗಿದ್ದೂ ಉಂಟು. ಬೇರೆಲ್ಲಾ ಮಾಮಂದಿರು ಮಾಮಿಯರು ಬಂದ ತಕ್ಷಣ ಮೈಸೂರಿಗೆ ಬರುವುದು. ತನಗೆ ಮುದ್ದು ಮಾಡುವುದು ಕಡಿಮೆಯಾಗಿತ್ತು. ಆದರೆ ಶ್ರೀಪಾದು ಮಾಮ ಯಾವ ಮಾಮಿಯ ಪಾಲೂ ಆಗದೇ ಇದ್ದದ್ದು ಅವನ ಪೂರ್ತಿ ಪ್ರೀತಿ ತನಗೇ ಸಲ್ಲಿತ್ತು.
ಒಂದು ದಿನ ಬಾಗಿಲ ಹಿಂದೆ ನಿಂತು ಕೇಳಿದ ಮಾತು. ಅಮ್ಮ ಬೇಸರ ಮಾಡಿಕೊಳ್ಳುತ್ತಿದ್ದಳು. “ಯಾವುದೋ ಹಾಳು ಹುಡುಗಿ ಹಿಂದೆ ಬಿದ್ದು ಅವಳು ಬೇರೆಯವನನ್ನು ಕಟ್ಟಿಕೊಂಡು ಹೋದ್ರೆ, ಶ್ರೀಪಾದು ಯಾಕೆ ಆಜನ್ಮ ಬ್ರಹ್ಮಚಾರಿ ಆಗಿರಬೇಕು’॒’
ಅಪ್ಪ ಸಮಾಧಾನ ಮಾಡಿದ್ದರು “ಎಲ್ಲಾ ಸ್ವಲ್ಪ ದಿನ. ಆಮೇಲೆ ಅದಾಗದೇ ಸರಿಹೋಗುತ್ತೆ. ಅವನಿಗೆ ತಾನೇ ಏನು ವಯಸ್ಸು ॒೨೩ ಹಾಗನ್ನಿಸೋದು ಸಹಜ. ಲಕ್ಷಣವಾದ ಹುಡುಗಿ ಮುಖ ನೋಡಿದರೆ ಎಲ್ಲಾ ಸರಿಹೋಗುತ್ತೆ’॒’
“ದೇವರೇ ॒ಸಧ್ಯ ಅವನು ಮದುವೆ ಆಗದೇನೇ ಉಳೀದೇ ಇದ್ರೆ ಸಾಕು ॒ನಿಮಗೆ ಅವನ ಹಠ ಗೊತ್ತಿಲ್ಲ’॒’
ಅಮ್ಮ ಮಾತು ಮುಗಿಸಿ ಹೊರಗೆ ಬಂದಾಗ, “ಇಲ್ಯಾಕೋ ಬಾಗಿಲಲ್ಲಿ ನಿಂತ್ಕೊಂಡು ದೊಡ್ಡೋರ ಮಾತು ಕೇಳ್ತಿದ್ದೀಯಾ’॒’ ಎಂದು ಗದರಿಸಿದ್ದಳು.
“ಕಾಫಿ ಮತ್ತೆ ಆರಿಹೋಗುತ್ತೆ’॒’ ರಮಾ ಹೆದರುತ್ತಲೇ ಜ್ಞಾಪಿಸಿದಳು.
“ಓ ಹೀಗೇ ಹಿಂದಿನದೆಲ್ಲಾ ಜ್ಞಾಪಕಕ್ಕೆ ಬಂತು’॒’ ಎಂದ ರಾಜೀವ. ಲೋಟ ತುಟಿಯ ಹತ್ತಿರಕ್ಕೆ ತೆಗೆದುಕೊಂಡು ಹೋಗುತ್ತಾ. ಆ ಮಾತುಗಳಲ್ಲಿದ್ದ ಬೇಸರದ ಛಾಯೆ ರಮಾಳ ಮುಖದ ಮೇಲೆ ಸಮಾಧಾನದ ಗೆರೆಗಳನ್ನು ಮೂಡಿಸಿದಂತೆ ಭಾಸವಾಯಿತು.
ಪೇಪರೋದಿ ಮುಗಿಸುವ ಹೊತ್ತಿಗೆ ಗಂಟೆ ಏಳೂವರೆ. ಹಾಗೇ ಹಾಸಿಗೆಯ ಮೇಲೆ ಅಡ್ಡಾದ ರಾಜೀವ. ಕಾಗದ ಬರೆಯಬೇಕು ॒ಶ್ರೀಪಾದರು ಮಾಮನ ಬಗ್ಗೆ ಸಂತಾಪ ಸೂಚಿಸಿ ಬರೆಯುವುದಾದರೂ ಯಾರಿಗೆ? ಹೆಂಡತಿ, ಮಕ್ಕಳು, ತಾಯಿ, ತಂದೆ ಯಾರೂ ಇಲ್ಲ. ಅಣ್ಣ, ತಮ್ಮ, ತಂಗಿಯರು ಹಚ್ಚಿಕೊಂಡಿಲ್ಲ, ಅದೂ ಅಷ್ಟು ಜನಕ್ಕೂ ಬರೆಯಲು ಸಾಧ್ಯವೇ? ರಾಜೀವನಿಗೆ ಹಾಯೆನಿಸಿತು. ಸಧ್ಯ, ಕೆಲಸವೊಂದು ಕಡಿಮೆಯಾಯ್ತಲ್ಲ ॒ಆದರೆ ತನಗೇಕೆ ಹೀಗಾಗಿ ಹೋಗಿದೆ? ಚಿಕ್ಕ ವಯಸ್ಸಿನಲ್ಲಿ ತನಗೋಸ್ಕರ ಎಷ್ಟು ಒದ್ದಾಡುತ್ತಿದ್ದ. ಈಗೇನೋ ನೋಡಿ ಹನ್ನೆರಡು ವರ್ಷಗಳಾಗಿರಬೇಕು. ಕೆಲಸ, ಮದುವೆ, ಮಕ್ಕಳು, ಜವಾಬ್ದಾರಿ ॒ತನಗೆ ಊರಿಗೆ ಹೋಗಲು ಸಮಯವಾದರೂ ಎಲ್ಲಿತ್ತು? ಆ ಕಡೆ ಹೋಗಿಬಂದವರ ಹತ್ತಿರವೆಲ್ಲಾ ಶ್ರೀಪಾದು ಮಾಮ ಹಲಬುತ್ತಿದ್ದನಂತೆ. “ರಾಜೀವನ ಹೆಂಡತಿ ಮಕ್ಕಳನ್ನು ನೋಡಿ ಹನ್ನೆರಡು ವರ್ಷವಾಗಿ ಹೋಯ್ತು ॒ಈ ಕಡೆ ಬಂದೇ ಇಲ್ಲ ॒ಹೇಗಿದಾರೋ ಏನೋ’॒’
ಅಷ್ಟು ನೋಡಬೇಕೆನಿಸಿದರೆ ಅವನಾದರೂ ಬರಬಹುದಾಗಿತ್ತು. ತಾನು ಎಂದಾದರೂ ಬಾ ಎಂದಿದ್ದನೇ? ಅಷ್ಟು ಹಚ್ಚಿಕೊಂಡಿದ್ದವನಿಗೆ ತಾನು ಕರೆಯಬೇಕೆಂಬ ಫಾರ್‍ಮಾಲಿಟಿ ಆದರೂ ಯಾಕೆ? ಆದರೆ ಅವನಿಗೆ ತನ್ನ ವಿಳಾಸ ಕೂಡ ಗೊತ್ತಿತ್ತೋ ಇಲ್ಲವೋ ॒ತಾನೆಂದಾದರೂ ಅವನಿಗೆ ಎರಡು ಸಾಲು ಕಾಗದ ಬರೆದು ಹಾಕಿದ್ದೆನೇ?
ಇದ್ದಕ್ಕಿದ್ದಂತೆ ಟೀವಿಯ ಚಿತ್ರಹಾರ್ ಶುರುವಾಯಿತು. ಕಿಶೋರ್ ಕುಮಾರ್ ಜೋರಾಗಿ ಹಾಡುತ್ತಿದ್ದ. “ರಮಾ ಟೀವಿ ಆರಿಸೋಕೆ ಹೇಳು. ಇವತ್ತೂ ನೋಡದಿದ್ದರೆ ಪ್ರಾಣ ಹೋಗುತ್ತೇನೋ’॒’ ಹಿಂದಿನಿಂದ ಚಿಕ್ಕು ಓಡಿಬಂದಿದ್ದ “ಅಪ್ಪ ಚಿತ್ರಹಾರ್ ಯಾಕೆ ನೋಡ್ಬಾರ್‍ದು ॒ಇದೊಂದು ಹಾಡು’॒’
“ನಾ ಹೇಳಿದ ಮಾತು ಸುಮ್ಮನೆ ಕೇಳು, ಪ್ರಶ್ನೆಗಳನ್ನು ಹಾಕ್ಬೇಡ. ಶ್ರೀಪಾದು ಮಾಮ’॒” ರಮಾ ಮಧ್ಯೆ ಬಾಯಿ ಹಾಕಿದಳು. “ಇವತ್ತು ಹೋಗಲಿ ಬಿಡು ಚಿಕ್ಕು ॒ಅಪ್ಪನಿಗೆ ಬೇಜಾರಾಗಿದೆ’॒’
“ಅಪ್ಪ ॒ಶ್ರೀಪಾದು ಮಾಮ ಯಾರು ॒ನಮ್ಮ ಸುರೂ ಮಾಮನ ಥರಾನಾ’॒’
“ಹೌದು, ಹೌದು. ನಿಂಗೆ ಅದೆಲ್ಲಾ ಅರ್ಥವಾಗೋಲ್ಲ. ಸುಮ್ಮನೆ ಆಡ್ಕೋ ಹೋಗು, ಬೇಕಾದರೆ ಪಕ್ಕದ್ಮನೆಗೆ ಹೋಗು.”
ಇಷ್ಟು ಹೊತ್ತಿನ ಮೇಲೆ ಪಕ್ಕದ ಮನೆಗೆ ಹೋಗಲು ಎಂದೂ ಇಲ್ಲದೆ ಪರ್ಮಿಷನ್ ಸಿಕ್ಕಿದ್ದರಿಂದ ಚಿಕ್ಕು ಸಂತೋಷದಿಂದ ಕುಣಿಯುತ್ತಾ ಓಡಿದ.
ರಮಾ ಕತ್ತಲಿನ ಕೋಣೆಯಲ್ಲಿ ಮೆಲ್ಲಗೆ ಬಂದಳು.
“ಊಟಕ್ಕಾದರೂ ಏಳ್ತೀರೇನು?”
“ಸರಿ ॒ತಟ್ಟೆ ಹಾಕು’॒’
“ಕಾಗದ’॒’
“ಯಾರಿಗೆ ಬರೆಯೋದು’॒’
“ನಮಗೆ ಸುದ್ದಿ ತಿಳಿಸಿದ ಕಾಶೀಗೆ ಬರೆಯೋದು’॒’
“ಕಾಶೀಗೆ! ಅವನೆಂಥಾ ಬಾದರಾಯಣ ಸಂಬಂಧಾಂತ’॒’
“ಬರೀದೇ ಇದ್ರೆ ಚೆನ್ನಾಗಿರೋಲ್ಲ’॒’
“ಸರಿ ಊಟವಾದ ಮೇಲೆ ಬರೀತೀನಿ.”
ರಾಜೀವ ಮುಜುಗರಗೊಂಡ. ಇವಳೂ ತನ್ನನ್ನು ಪರೀಕ್ಷಿಸುತ್ತಿದ್ದಾಳೇನೋ. ಎಷ್ಟೋ ಸಲ ಹೇಳಿದ್ದಳು. “ನಿಮಗೆ ನಿಮ್ಮವರನ್ನು ಒಂದು ಸಲಾನಾದ್ರೂ ನೋಡಬೇಕು ಅನ್ನಿಸೋದೇ ಇಲ್ವೇ ॒ವಿಚಿತ್ರಾಪ್ಪ. ಹನ್ನೆರಡು ವರ್ಷ ಆಯ್ತು ॒ಊರಿನ ಕಡೆ ಹೋಗಿ”
ಮಾತಿಲ್ಲದೆ ಊಟ, ಹಸಿವೇಯೇನೂ ಕಡಿಮೆಯಿರಲಿಲ್ಲ. ಗೊಜ್ಜು ರುಚಿಯಾಗಿದ್ದರಿಂದ ದಿನಕ್ಕಿಂತ ಹೆಚ್ಚಿಗೆಯೇ ಕಲಸಿಕೊಂಡ, ಸಾರು ಖಾರವೆನಿಸಿತು. ಆದರೆ ಹೇಳಲು ಧೈರ್ಯ ಬರಲಿಲ್ಲ. ಮತ್ತೆ ರೂಮಿಗೆ ಬಂದು ಹಾಸಿಗೆಯ ಮೇಲೆ ಉರುಳಿದ. ಹೊರಗಿನ ಬೀದಿಯ ದೀಪದ ಮಂದ ಬೆಳಕು ರೂಮನ್ನು ತುಂಬಿತ್ತು. ನಕ್ಷತ್ರಗಳು ಕಣ್ಣುಮುಚ್ಚಾಲೆಯಾಡುತ್ತಿದ್ದವು. ಎಂಥಾ ಸುಂದರ ರಾತ್ರಿ! ಪಕ್ಕದ ರೂಮಿನಲ್ಲಿ ಚಿಕ್ಕೂನ ಹಾಸಿಗೆಗೆ ಸೊಳ್ಳೆಪರದೆ ಇಳಿಬಿಡುತ್ತಿದ್ದ ರಮಾಳ ಬಳೆಗಳ ಕಿಣಿಕಿಣಿ ಶಬ್ದ. ಬೆಳಿಗ್ಗೆ ಬರ್ನಿ ಹತ್ತಿರ ಬಂದಾಗಲೂ ಇದೇ ರೀತಿ ಕಿಣಿಕಿಣಿ ಶಬ್ದ ಮಾಡಿದ್ದಳು. ಅಬ್ಬ ॒ಎಂಥಾ ಹುಡುಗಿ, ಏನು ಮೈಮಾಟ, ಅಲಂಕಾರ, ಕುಲುಕುಲು ನಗು, ಕಣ್ಮಿಂಚು. ಇವತ್ತಂತೂ ಕಾರಣವಿಲ್ಲದೆ ನಾಲ್ಕಾರು ಸಲ ಮೈ ಸವರಿಕೊಂಡೇ ನಡೆದಿದ್ದಳು. ಕೊಂಕು ನೋಟ ಬೀರಿದ್ದಳು. “ಚೀಪ್ ಗರ್ಲ್” ಎಂದು ಆಫೀಸಿನವರ ಎದುರಿಗೆ ಅಂದಿದ್ದರೂ ಮೈ ಕಾವೇರಿದ್ದು ನಿಜ. ಆದರೆ ಧೈರ್ಯ ಬಂದಿರಲಿಲ್ಲ, ಥತ್, ಆ ಥಾಮಸ್ ಥರಾ ದಿನಾ ಒಂದೊಂದು ಹೊಸ ಹುಡುಗಿಯ ಜೊತೆ ಫ್ಲರ್ಟ್ ಮಾಡಿ ಬಿಟ್ಟುಬಿಡುವ ಹಾಗಿದ್ದರೆ ಎಷ್ಟು ಚೆನ್ನಾಗಿತ್ತು. ಆದರೆ ಈಗಲೂ ಆ ರೀತಿಯ ಸಂಬಂಧಗಳೆಂದರೆ ಭಯ. ಹೆಂಡತಿ-ಜೀವಮಾನವೆಲ್ಲಾ ಜೊತೆಯಲ್ಲಿರಬೇಕಾದವಳೊಂದಿಗೆ ಮಾತ್ರ ಎಲ್ಲ ಸಂಬಂಧಗಳೂ ಎಂಬ ವಿಚಾರ ಮೈತಳೆದುಹೋಗಿವೆ. “ನೀನೊಬ್ಬ ಹಿಪೋಕ್ರೈಟ್ ನೀನೇನು ಇಮೋಷನಲ್ ಅಡಲ್ಟ್ರಿ ಮಾಡೋಲ್ಲ ಅಂತೀಯೇನು? ನನ್ನನ್ನು ಫೂಲ್ ಮಾಡಬೇಡ’॒’ ಎಂದ ಥಾಮಸ್ ಮೇಲೆ ತುಂಬಾ ಕೋಪ ಬಂದಿತ್ತು, ಜೊತೆಗೆ ಹೊಟ್ಟೆಕಿಚ್ಚೂ ಆಗಿತ್ತು.
ರಮಾ ಮೆಲ್ಲನೆ ಹತ್ತಿರ ಬಂದು ಪಕ್ಕದಲ್ಲಿ ಮಲಗಿದ್ದಳು. ನಸುಬೆಳಕಿನಲ್ಲಿ ಅವಳ ಉಬ್ಬುತಗ್ಗುಗಳು, ಆಗಲೇ ಬರ್ನಿಯ ನೆನಪಿನ ಗುಂಗಿನಲ್ಲಿ ಹುಚ್ಚೆದ್ದಿದ್ದ ಅವನಿಗೆ ಮತ್ತೇರಿಸಿದವು. ರಮಾನ ಹತ್ತಿರಕ್ಕೆಳೆದುಕೊಂಡ. ಕ್ಷಣ ಕ್ಷಣ ಕಳೆದಂತೆ ರಮಾ ನಿಧಾನವಾಗಿ ಕರಗಿ, ಅವನ ಮನಸ್ಸಿನ ತುಂಬಾ ಬರ್ನಿ ಆವರಿಸಿದಳು.
ತನ್ನ ಆವೇಶ ಕಡಿಮೆಯಾದಂತೆ, ಇದ್ದಕ್ಕಿದ್ದಂತೆ ತಣ್ಣಗಾದ ರಾಜೀವ, ರಮಾ ಏನಂದುಕೊಂಡಳೋ? ಶ್ರೀಪಾದು ಮಾಮ ಹೋದನೆಂದು ತಿಳಿದ ದಿನ ಕೂಡ ॒ಆದರೆ ॒ಯಾವುದೋ ಆದರ್ಶ ಹಿಡಿದು ಕುಳಿತಿದ್ದ ಶ್ರೀಪಾದ ಮಾಮ ಇಂಥಾ ಅನುಭವ ಒಂದು ಸಲವೂ ಅನುಭವಿಸದೇ ಪ್ರಾಣ ಬಿಟ್ಟಿದ್ದನೇ? ಅಥವಾ ಬೇರೆ ಯರೊಂದಿಗೂ ಹಮ್ಮಿಕೊಳ್ಳದಷ್ಟು ಆ ಹುಡುಗಿಯನ್ನು ಪ್ರೀತಿಸಿದ್ದನೇ? ಅದಕ್ಕೆಂಥಾ ಮನಸ್ಥೈರ್ಯಬೇಕು? ಮನಸ್ಥೈರ್ಯವೇನು ಮಣ್ಣ. ಅದೊಂದು ರೀತಿ ಮೂರ್ಖತನ, ಕೆಟ್ಟ ಹಟ. ತನ್ನನ್ನು ತಾನೇ ಪನಿಶ್ ಮಾಡಿಕೊಂಡು, ತಮ್ಮ ಜೀವನ ಹಾಳು ಮಾಡಿಕೊಂಡರೆ ಏನು ಬರುತ್ತೆ? ಸಾವಿನ ಸುದ್ದಿ ಕೂಡ ಬರ್ನಿಯ ಬಯಕೆಯ ಮೊನಚನ್ನು ಕಡಿಮೆ ಮಾಡಿರಲಿಲ್ಲ.. ಅಂಥಾದ್ದರಲ್ಲಿ ಶ್ರೀಪಾದು ಮಾಮ ॒ಎಲ್ಲೋ ಗಂಟೆ ಹೊಡೆಯಿತು. ಬೆಚ್ಚಿ ಬಿದ್ದ ರಾಜೀವ.
ಎಷ್ಟು ಹೊತ್ತಾದರೂ ನಿದ್ದೆ ಬರದು, ಹಲವಾರು ಬಾರಿ ಮಗ್ಗಲು ಬದಲಾಯಿಸಿದ. ಬಚ್ಚಲು ಮನೆಗೆ ಹೋಗಿ ಬಂದ. ನೋಡಿದರೆ ರಮಾಗೂ ನಿದ್ದೆ ಹತ್ತಿದಂತಿರಲಿಲ್ಲ. ಮೆಲ್ಲಗೆ ಕೇಳಿದ, “ನಿದ್ದೆ ಬರಲಿಲ್ಲವೆ’॒’
“ಇಲ್ಲ’॒’
“ಅಲ್ಲಾರೀ ನೀವು ಕಾಗದ ಬರೆಯೋದೇ ಮರೆತೇಬಿಟ್ರಿ, ಬೆಳಗಾಗೆದ್ದು ಆಫೀಸ್. ಇನ್ನು ಸಾಯಂಕಾಲ ಮನೆಗೆ ಬಂದ ಮೇಲೆಂದ್ರೆ ಎಷ್ಟು ತಡ’॒’ “ಅದೇಕೆ ಶ್ರೀಪಾದ ಮಾಮ ಸತ್ತ ವಿಷಯ ಹಾಗೆ ಪದೇ ಪದೇ ನ್ಯಾಗ್ ಮಾಡ್ತಿದೀಯಾ?! ಅವನು ನಮ್ಮ ಪಾಲಿಗೆ ಸತ್ತು ಯಾವುದೋ ಕಾಲವಾಗಿತ್ತು” ಬಾಯಿಂದ ಮಾತುಗಳು ಹೊರಬಿದ್ದ ಮೇಲೆ ಸ್ವಲ್ಷ ಹೆಚ್ಚಾಯಿತೇನೋ ಅನ್ನಿಸಿತು. ರಮಾ ತೆಪ್ಪಗಾದಳು.
ರಾತ್ರಿ ಕಳೆದಂತೆ ರಾಜೀವನಿಗೆ ಇನ್ನೂ ಮುಜುಗರ, ನಿದ್ದೆ ಬರದು, ಎದ್ದು ಹೋಗಿ ಕಾಂಪೋಸ್ ಆದರೂ ತೆಗೆದುಕೊಳ್ಳಲೇ? ಬೆಳಿಗ್ಗೆ ಡಿಸೋಜಾಗೆ ರಿಪೋರ್ಟ್ ಕೊಡಬೇಕು, ಅಮೇಲೆ ಈ ಕ್ಲಯಂಟ್ ಮೀಟಿಂಗಿಗೆ ಹೋಗಬೇಕು. ಅವನೋ ತುಂಬಾ ಕಿರಿಕಿರಿ ಮನುಷ್ಯ. ಹೇಳಿದ್ದೇ ಹೇಳಿ ಕೊರೀತಾನೆ. ಸಂಜೆ ಆ ಪಂಜಾಬಿ ಫರ್ಮಿನವರ ಜೊತೆ ಕಾಕ್‌ಟೇಲ್, ಅದೇ ಮಬ್ಬುಗತ್ತಲೆ ಕುಡಿತ, ಅಸಭ್ಯ ಜೋಕುಗಳು, ಬಲವಂತದ ಜೋರಾದ ನಗು. ಆದರೆ, ಹೇಗೋ ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಟ್ಟರೆ ತನಗೆ ಚಾಂದಿ. ಬರ್ನಿಗೆ ತಾನು ಹೆಚ್ಚಿಗೆ ಸಲಿಗೆ ತೋರಿಸಲಿಲ್ಲಾಂತ ಕೋಪ ಬಂದಿರಬಹುದೇ? ನಾಳೆ ಒಂದಿಷ್ಟು ತಮಾಷೆಯಾಗಿ ಮಾತಾಡಿ ನೋಡಬೇಕು. ತಪ್ಪಾದರೂ ಏನಿದೆ. ಆದರೆ ಈ ಸಲಿಗೆ ಮುಂದುವರೆಇದರೆ ॒ರಮಾಗೇ ಎರಡು ಬಗೆದಂತೆಯೇ? ತಾನೇನೂ ಶ್ರೀಪಾದ ಮಾಮನಲ್ಲವಲ್ಲ ॒ಯಾವುದೋ ಹುಡುಗಿಯ ನೆನಪಿನಲ್ಲಿ ಜೀವಮಾನವೆಲ್ಲಾ ಹಾಳು ಮಾಡಿಕೊಳ್ಳೋಕೆ ॒ಇದು ಕೇವಲ ಕ್ಯಾಷುಯಲ್ ಸಂಬಂಧ ಅಷ್ಟೆ. ಶ್ರೀಪಾದ ಮಾಮ ಬದುಕಿದ್ದರೆ, ತನ್ನನ್ನು ಬರ್ನಿಯ ಜೊತೆ ನೋಡಿದ್ದರೆ ಏನಂದುಕೊಳ್ಳುತ್ತಿರಬಹುದು? ಒಂದು ಕಾಂಟ್ರಾಕ್ಟ್‌ಗೋಸ್ಕರ ಬಾರಿನ ಮಬ್ಬುಗತ್ತಲೆಯಲ್ಲಿ ಕೊಳೆತ ಜೋಕುಗಳನ್ನು ಕತ್ತರಿಸುತ್ತಾ ಸಂಜೆ ಮೇಲೆ ಸಂಜೆ ಕಳೆಯುವ ತನ್ನನ್ನು ಅವನು ಗುರುತಿಸುತ್ತಿದ್ದನೇ?
“ಏನೋ ಆ ಚಂಚಲ ರಾಜೂನ್ನ ಕಟ್ಟಿಕೊಂಡು ಓಡಿಹೋದಾಗ ಮದುವೇನೇ ಮಾಡಿಕೊಳ್ಳೊಲ್ಲ ಅಂತಿದ್ದೆ’॒’
“ರಾಚಯ್ಯನ ಮನೆ ರಾಗಿ ರೊಟ್ಟಿ ಹೊಡೆದು ಬಂದು ಅಮ್ಮನ ಕೈಲಿ ಒದೆ ತಿಂದಿದ್ದು ಜ್ಞಾಪಕ ಇದೆಯೇನೋ’॒’
“ನಾನು ಡಾಕ್ಟರೇ ಆಗೋದು ॒ಹಳ್ಳಿಗಳಲ್ಲಿ ಸೇವೆ ಮಾಡೋದು ಅಂತಿದ್ದೆ’॒’
“ಅವತ್ತು ೧೦೫ ಡಿಗ್ರಿ ಜ್ವರ ಹೋಗಿ ಎಷ್ಟು ಹೆದರಿಸಿ ಬಿಟ್ಟಿದ್ಯೋ ॒ರಾತ್ರಿ ಎಲ್ಲಾ ನಾನು, ನಿಮ್ಮಮ್ಮ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಒದ್ದೆಬಟ್ಟೆ ಹಾಕ್ತಾ ಕೂತಿದ್ವಲ್ಲೋ’॒’
“ಮೋತಿ ಹೋದಾಗ ಮೂರು ದಿನ ಉಪವಾಸ ಮಾಡಿಬಿಡ್ಯಲ್ಲೋ ॒ಆ ನಾಯಿಮರಿ ಮೇಲೆ ಎಂಥಾ ವ್ಯಾಮೋಹ ॒ಇಂಥಾ ಹೆಂಗರುಳಾದ್ರೆ ಮುಂದೆ ಕಷ್ಟ’॒’
“ಇದ್ರೆ ರಾಜೀವನ ಹಾಗಿರಬೇಕು ॒ಒಂದು ಸಿಗರೇಟ್ ಮುಟ್ಟೋಲ್ಲ ॒ಒಂದು ದಿನ ಸಂಧ್ಯಾವಂದನೆ ತಪ್ಪಿಸೊಲ್ಲ’॒’
“ಅಂತೂ ಧೈರ್ಯ ಮಾಡಿ ಎಲ್ಲಾರನ್ನೂ ಎದುರು ಎತ್ತಿಹಾಕ್ಕೊಂಡೂ ಬೊಂಬಾಯಿಗೆ ಹೊರಟು ಬಿಟ್ಟೇನ್ನು,॒ ಶಬ್ಬಾಷ್ ॒ಯೋಚ್ನೆ ಮಾಡಬೇಡ ॒ಏನಾದ್ರೂ ತಾಪತ್ರಯ ಆದ್ರೆ ಬರಿ ॒ನಾನು ದುಡ್ಡು ಗಿಡ್ಡು ಬೇಕಾದ್ರೆ ಕಳಿಸ್ತೀನಿ’॒’
“ನೀನು ಸ್ವಲ್ಪ ಸೆಟಲ್ ಆಗ್ಬಿಡು, ಹಾಯಂತ ನಿಮ್ಮನೇಲಿ ಬಂದು ಇದ್ಬಿಡ್ತೀನಿ’॒’
ಊರಿಗೆ ಹೋದಾಗಲೆಲ್ಲಾ, ತನ್ನ ಬಾಲ್ಯವನ್ನು ಅದರ ಮೂಲಕ ಬಾಲ್ಯದ ತನ್ನನ್ನು ಜೀವಂತವಾಗಿಸುತ್ತಿದ್ದ ಶ್ರೀಪಾದ ಮಾಮ ತನ್ನ ಪಾಲಿಗೆ ಸತ್ತು ಹೋಗಿದ್ದು ಎಂದು?
ದುಡ್ಡಿನಾಸೆಗೆ ರಮಾಳ ಕೈಹಿಡಿದ ದಿನವೇ?
ಅಮ್ಮನಿಗೆ ಸೀರಿಯಸ್ ಎಂದು ತಿಳಿದೂ ೮ ಲಕ್ಷದ ಕಾಂಟ್ರಾಕ್ಟ್ ಕೈತಪ್ಪಿ ಹೋಗುತ್ತೇಂತ ಕೊನೇ ಗಳಿಗೇಲಿ ಅವಳ ಮುಖ ನೋಡಲು ಹೋಗದಿದ್ದಾಗಲೇ?
ತನ್ನ ಮೊದಲ ಪೆಗ್ ವಿಸ್ಕಿ ಮುಟ್ಟಿದಾಗಲೇ?
ಬರ್ನಿಯ ಮೈ ಡೊಂಕುಗಳನ್ನು ನೆನೆಯುತ್ತಾ ರಮಾಳನ್ನು ಹತ್ತಿರಕ್ಕೆಳೆದುಕೊಂಡಾಗಲೇ?
ಲಾಲವಾನೀ ತೋರಿಸಿದ ಎಂಟು ಸಾವಿರ ಸಂಬಳದ ಆಸೆಗೋಸ್ಕರ ಈ ಕಚಡಾ ಜಾಬ್ ಮಾಡಿಕೊಂಡ ದಿನವೇ?
ಕಾಂಟ್ರಾಕ್ಟ್ ಜೇಬಿಗೆ ಹಾಕಿಕೊಳ್ಳಲೋಸುಗ ಆ ಚಾವ್ಡಾಗೆ ತಾಜ್‌ನಲ್ಲಿ ರೂಮು ಬುಕ್ ಮಾಡಿಕೊಟ್ಟು, ತನ್ನ ಖರ್ಚಿನಲ್ಲಿ ಎಲ್ಲಾ ಏರ್ಪಾಟು ಮಾಡಿಕೊಟ್ಟಾಗಲೇ?
“ಅವನ ಕೊನೇ ಕರ್ಮ ಯಾರು ಮಾಡಿದರೋ’॒’ ಕತ್ತಲನ್ನು ಸೀಳಿ ಬಂದ ರಮಾಳ ಮಾತು ಕೇಳಿ ಬೆಚ್ಚಿ ಬಿದ್ದ ರಾಜೀವ.
“ಯಾರದು’॒’
“ಮತ್ಯಾರದು ॒ಶ್ರೀಪಾದು ಮಾಮನದು’॒’ ವಿಚಿತ್ರವಾದ ಧ್ವನಿಯಲ್ಲಿ ಮಾತಾಡಿದಳು ರಮಾ “ನ್ಯಾಯವಾಗಿ ನೀವೇ ಮಾಡಬೇಕಾಗಿತ್ತು. ನಿಮ್ಮನ್ನು ಮಗನಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದಾಂತ ಹೇಳ್ತಿದ್ರಿ ॒ಅವನಿಗಂತೂ ಹೆಂಡತಿ ಮಕ್ಕಳಿಲ್ಲ ॒ಅಂದ ಮೇಲೆ ॒“ರಾಜೀವ ನಿರುತ್ತರನಾದ, ಶ್ರೀಪಾದು ಮಾಮನ ಕೊನೇ ಕರ್ಮ ಯಾರು ಮಾಡಿದರೋ?
ಬೆಳಿಗ್ಗೆ ಎಂಟು ಗಂಟೆಗೆ ಆಫೀಸಿಗೆ ಹೊರಡುವ ಅವಸರದಲ್ಲಿದ್ದಾಗ ಫೋನಿನ ಕರೆ. ರಾಜೀವ ಬಚ್ಚಲು ಮನೆಯಲ್ಲಿರುವುದನ್ನು ನೋಡಿ, ರಮಾನೇ ಮಾತಾಡಿದಳು. ಇವನು ಹೊರಬರುತ್ತಲೇ ಹೇಳಿದಳು.
“ಬೆಂಗಳೂರಿನಿಂದ ಫೋನ್ ಬಂದಿತ್ತು. ಶ್ರೀಪಾದು ಮಾಮ ಇದ್ದಬದ್ದ ಒಂದು ಚೂರು ಆಸ್ತಿ ಎಲ್ಲಾ ನಿಮಗೇ ಬಿಟ್ಟುಹೋಗಿದಾನಂತೆ ॒ಅವೆಲ್ಲಾ ಸೆಟಲ್ ಮಾಡೋಕೆ ಅದಷ್ಟು ಬೇಗ ಬೆಂಗಳೂರಿಗೆ ಬರಬೇಕಂತೆ’॒’
ಅವಳಿಗೂ ಸಂತೋಷವಾದಂತಿತ್ತು. ಧ್ವನಿಯಲ್ಲಿ ಉತ್ಸುಕತೆಯಿದ್ದಂತಿತ್ತು, ದುಡ್ಡು ಯಾರಿಗೆ ಬೇಡ. “ಪಾಪ, ಎಷ್ಟು ಹಚ್ಚಿಕೊಂಡಿದ್ದ ನೋಡಿ’॒’ ಎಂದಳು. “ಹೋಗುವ ಮುಂಚೆ ಒಂದು ಬಾರಿಯೂ ನೋಡಲಾಗಲಿಲ್ಲ” ಎಂದಳು. “ಚಿಕ್ಕೋರಿದ್ದಾಗಲೇ ತಂದೇನ ಕಳಕೊಂಡ ನಿಮಗೆ ತಂದೆಗಿಂತ ಹೆಚ್ಚಾಗಿದ್ದ. ನಾವಿಂದು ಮನುಷ್ಯರಾಗಿ ಬದುಕುತ್ತಾ ಇರೋದು ಅವನಿಂದ. ಚಿಕ್ಕೂನ ನೋಡಿದ್ರೆ ಎಷ್ಟು ಸಂತೋಷಪಡ್ತಿದ್ನೋ’॒’ ಎಂದಳು.
ರಾಜೀವನ ನೀರವತೆ ನೋಡಿ, ಅನುಮಾನಿಸುತ್ತಾ “ಬೆಂಗಳೂರಿಗೆ ಯಾವಾಗ ಹೊರಡ್ತೀರಾ’॒’ ಎಂದಳು.
“ಆಂ’॒’
“ಬೆಂಗಳೂರಿಗೆ ಅರ್ಜೆಂಟಾಗಿ ಬರಲು ಹೇಳಿದರು’॒’
“ನಾನು ಬೆಂಗಳೂರಿಗೆ ಹೋಗುತ್ತಿಲ್ಲ’॒’
“ಏನು ಶ್ರೀಪಾದು ಮಾಮ ॒ಅಷ್ಟು ಆಸ್ತೀನೂ’॒’
“ತಿಳೀತು’॒’
“ಫಾರ್ಮಾಲಿಟೀಸ್ ಎಲ್ಲಾ ಇರುತ್ತೆ ॒ಸಾವು ಬಾಳಿನ ವಿಷಯ ॒ತಕ್ಷಣ ಹೋಗದಿದ್ದರೆ ಚೆನ್ನಾಗಿರೊಲ್ಲ’॒’
“ನಾನು ಹೇಳಿದೆನಲ್ಲಾ ॒ನಾನು ಹೋಗುತ್ತಿಲ್ಲಾಂತ’॒’
“ಮತ್ತೆ ॒ಆ ಆಸ್ತೀನೆಲ್ಲಾ ಏನು ಮಾಡ್ತಾರೆ’॒’
“ಅದನ್ನ ಕಟ್ಕೊಂಡು ನನಗೇನು ॒ಯಾವುದಾದ್ರೂ ಟ್ರಸ್ಟ್‌ಗೆ ಕೊಡಬಹುದು ॒ಅವರೇ ಹಂಚಿಕೊಳ್ಳಬಹುದು’॒’
“ಅದು ಶ್ರೀಪಾದು ಮಾಮನ್ನ ನೋಯಿಸಿದ ಹಾಗಲ್ಲವೆ ॒ಅವರ ಕೊನೇ ಗಳಿಗೆಯ ಆಸೆ ಪೂರೈಸದೆ’॒’
“ನನಗೇನೂ ಅರ್ಥ ಆಗ್ತಾ ಇಲ್ಲ’॒’
“ನಿಂಗೆ ಆಗೋದೂ ಇಲ್ಲ ॒ಅವನು ಆಸ್ತಿ ಬಿಟ್ಟಿದ್ದು ನನಗಲ್ಲ’॒’ ಮಂಪರಿನಲ್ಲಿರುವವನಂತೆ ಮಾತಾಡಿದ ರಾಜೀವ.
“ಅಯ್ಯೋ ॒ಅವರು ಫೋನ್‌ನಲ್ಲಿ ಕ್ಲಿಯರ್ ಆಗಿ ಹೇಳಿದರು ॒ಇದೇನೂ ತಮಾಷೆ ವಿಷಯವಲ್ಲವಲ್ಲ ॒ನೀವು ಸರಿಯಾಗಿದೀರಾ ತಾನೇ?”
“ಅವರು ಹೇಳಿದ್ದು ಸರೀಂತ ನನಗೂ ಗೊತ್ತು ॒ಆದರೆ ಹೇಳಿದೆನಲ್ಲಾ ॒ಶ್ರೀಪಾದು ಮಾಮ ಆಸ್ತಿ ಬಿಟ್ಟಿದ್ದು ನನಗಲ್ಲ’॒’ ಎಂದು ಗೊಣಗುತ್ತಾ ಆಫೀಸ್ ಬಸ್ ಹಿಡಿಯಲು ನಿಧಾನವಾಗಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ರಾಜೀವ.



-ಉಮಾ ರಾವ್

No comments:

Post a Comment